ಶುಕ್ರವಾರ, ಆಗಸ್ಟ್ 12, 2016

ಸಾಧನೆಗೈಯುವ ಛಲದಂಕ ಮಲ್ಲ

ಗೊತ್ತಿಲ್ಲ ಇವನ್ಯಾಕೆ ನಂಗೆ ಪದೆ ಪದೇ ಫೋನ್ ಮಾಡ್ತಾ ಇದ್ದಾನೆ ಅಂತಾ. ಹ್ಹಾ ಚೆನ್ನಾಗಿದ್ದೀನಿ ಭದ್ರಾವತಿಗೆ ಬಂದಾಗ ಸಿಕ್ತಿನಿ.. ಸ್ವಲ್ಪ ಕೆಲಸ ಇದೆ ಅಂತೇಳಿ ಫೋನ್ ಕಟ್ ಮಾಡ್ತಿದ್ದೆ. ಮತ್ತೆ ಒಂದ್ ವಾರದೊಳಗೆ ನಾಲ್ಕಾರ್ ಸಲ ಫೋನ್ ಮಾಡೋನು.. ಓ ಇವನು ಬಿಡೋಂಗೆ ಕಾಣ್ಸೊಲ್ಲ ನನ್ನ ಅಂತ ಅನ್ಕೊತ್ತಿದ್ದೆ. ಆದರೆ ಇವತ್ತು ಅವನನ್ನ ಬಿಡ್ ಬಾರದಪ್ಪ.. ಯಾವಾಗಲೂ ನಮ್ ಸ್ನೇಹ ಶಾಶ್ವತವಾಗಿ ಹೀಗೆ ಇರ್ಲಪ್ಪ ಅನ್ಕೋತೀನಿ.

ಯಾಕೆ ಈ ತಾತ್ಸಾರ ಮತ್ತೆ ಸ್ವಾರ್ಥ ಎರಡೂ ಹೇಳ್ತ ಇದ್ದೀನಿ ಗೊತ್ತಾ? ಅವನನ್ನ ತಿಳ್ ಕೊಳ್ಳೊದೇ ಇಲ್ದೊರು ಅವನ ಬಗ್ಗೆ ತಾತ್ಸಾರ ಮಾಡಬಹುದು.. ಆದರೆ ಅವನ ಸ್ನೇಹದಲ್ಲಿ ಇದ್ದೊರು ಇಂಥಾ ಗೆಳೆಯ ಯಾವಾಗ್ಲೂ ಇರಬೇಕಾಪ್ಪ ಅನ್ನೊ ಸ್ವಾರ್ಥ ಇಟ್ಕೊಂಡೋರು. ನಾನು ಕೂಡ ಈ ಚಲದಂಕ ಮಲ್ಲ ಮಾಲತೇಶನ ಸ್ನೇಹನ ಹೆಚ್ಚು ಬಯಸಿದ್ದೊರಲ್ಲಿ ಒಬ್ಬ.

ಛಲದಂಕ ಮಲ್ಲ ಅಂಥಾ ಏಕೆ ಕರಿತಿದ್ದೀನಿ ಅವನಿಗೆ ಅಂತಾ ಗೊತ್ತಾ? ಏನಾದ್ರೂ ಒಂದ್ ಅನ್ಕೊಂಡ್ರೆ, ಇದಾಗ್ ಬೇಕಾಪ್ಪ ಅಂತಾಂದ್ರೆ, ಏ ಆ ವಸ್ತು ನಾಳೆನೇ ನಾನ್ ತಗೋಬೇಕು ಅಂತಂದ್ರೆ... ಮರುದಿನ ಅದು ಅವನಾದಾಗಿರುತ್ತೆ. ಹೇ ಬಿಡು ಮಗಾ... ಏನ್ ಅಮ್ಮಮ್ಮಾ ಅಂದ್ರೆ ಸಾಲ ತಾನೇ ಆಗೋದು ಸಾವಲ್ವಲ್ಲ .. ಅಂಥ ಹಿಡಿದ ಕೆಲ್ಸಾನ, ಇಷ್ಟಪಟ್ಟ ವಸ್ತುನಾ ಅವನು ಅನ್ಕೊಂಡಾಗೆ ಮಾಡೋ ಛಲಗಾರ.

ಜೀವನದಲ್ಲಿ ಆನಂದ ಅನುಭವಿಸೋ ಟೈಮಲ್ಲಿ, ಬರೀ ಕಷ್ಟಗಳನ್ನೆ ಉಂಡು,  ಮನಸ್ಸನ್ನ ಹೆಬ್ಬಂಡೆ ಮಾಡ್ಕೊಂಡು ಎಲ್ಲ ತೊಂದರೆಗಳನ್ನ, ಸಮಸ್ಯೆಗಳನ್ನ, ಆರ್ಥಿಕ ಸಂಕಟಗಳನ ಎದುರಿಸುತ್ತಾ, ತನ್ನ ಕಷ್ಟನಾ ಯಾರಿಗೂ ತೋರಿಸ್ ಕೊಳ್ಳದೆ, ಸದಾ ಹುರುಪು, ಹುಮ್ಮಸ್ಸಿನ ಮಾತುಗಳನ್ನ ನಮ್ ಹತ್ರಾ ಹಂಚಿಕೊಳ್ಳೊ, ನನಗೆ ಮಾದರಿ ಎನಿಸೋ ನಮ್ ಮಾಲ್ತಿ ನಿಜವಾಗಲೂ ಧೈರ್ಯಶಾಲಿ.

ವೈಯುಕ್ತಿಕವಾಗಿ ತನ್ನ ಸಂಬಂದಿಕರು ಕೊಟ್ಟ ಕ್ವಾಟಲೆಗಳನ್ನ, ಕೆಲಸ ಪಡೆಯುವಾಗ ಅನುಭವಿಸಿದ ಯಾತನೆಗಳನ್ನ, ಜೀವನ ಒಂದ್ ಹಂತಕ್ಕೆ ಬಂದು ಗೃಹಾಸ್ಥ ಆಗುವಾಗ ಮಾತೃವಿಯೋಗದಿಂದ ನರಳಾಡಿದ ನೆನಪುಗಳನ್ನ, ಯಜಮಾನನಿಂದ ಬಡ್ತಿ ಪಡೆದು ತಂದೆ ಆಗೋ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಡ್ತಿ ತಡೆ ಹಿಡಿದ ತೊಳಲಾಟವನ್ನ.. ಆಪ್ತರ ಅನಾರೋಗ್ಯ ಸಮಸ್ಯೆಯಿಂದಾದ ಸಂಕಟವನ್ನ ತಾನೊಬ್ಬನೆ ಹೆಗಲು ಕೊಟ್ಟು ಅಷ್ಟೂ ಸಮಸ್ಯೆಗಳನ್ನ ಇಷ್ಟು ವರುಷ ಹೊತ್ತುಕೊಂಡು ಬರುತ್ತೀರುವ ಗೆಳೆಯ ಮಾಲತೇಶನ ಕಷ್ಟದ ಹೊರೆ ಕರಗಿ ಸುಖ ಸಂತೋಷದ ನೊರೆ ಜೀವನದಲಿ ಉಂಟಾಗಿ ನೆಮ್ಮದಿಯಿಂದ ಇನ್ನುಳಿದ ಕಾಲಗಳ ಕಳೆ... ಇದೋ ನಿನಗೆ ೨೮ ನೆಯ ವರುಷದ ಹುಟ್ಟು ಹಬ್ಬದ ಶುಭಾಶಯಗಳು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ